ಕಣ್ಣಾಯಿಸಿದವರು

Wednesday, 20 March 2019

ಆಲಾಪ

ಸೆಲ್ಫೂ ಮತ್ತು ಲೈಫು

ಜಗತ್ತು ಬೆಳೆದಂತೆಲ್ಲ ಮಾನವೀಯತೆ ಅನ್ನೋದು ಕ್ಷೀಣ ಆಗ್ತಾ ಇದ್ಯೇನೋ ಅಂತ ಆಗಾಗ ಅನ್ಸತಾನೇ ಇರುತ್ತೆ. ಆದ್ರೆ ಎಲ್ಲೋ ಒಂದ್ಕಡೆ ಅದು ಇನ್ನೂ ಜೀವಂತವಾಗೇ ಇದೆ. ಸ್ವಾರ್ಥನೇ ತುಂಬಿರೋ ಪ್ರಪಂಚದಲ್ಲಿ ನಾವು ಬದುಕಬೇಕಾಗಿ ಬರುತ್ತೆ ಅನ್ನೋದು ಎಷ್ಟು ಸತ್ಯನೋ ಅಷ್ಟೇ ಅಲ್ಲಲ್ಲಿ ಕಾಣ್ಸೋ ಮಾನವೀಯ ಮೌಲ್ಯಗಳನ್ನ ನೈತಿಕತೆಯ ಮಜಲುಗಳನ್ನ ಅನುಭವಿಸುವುದರಲ್ಲಿ ನಾವು ನಮಗರಿವಿಲ್ಲದಂತೆ ವಂಚಿತರಾಗ್ತಾನೇ ಇರ್ತೀವಿ.

    ಎಲ್ಲೆಲ್ಲೂ ಕತ್ತಲು ತುಂಬಿದೆ ಅಂತ ಬಾಯಿ ಬಾಯಿ ಬಡಿದುಕೊಂಡು ದಿನಂಪ್ರತಿ ಕಗ್ಗತ್ತಲಲ್ಲೇ ವಾಸಮಾಡ್ತಾ ಇದ್ರೆ ನಾವು ನಮ್ಮ ಕಣ್ಣುಗಳನ್ನ ಕಳೆದುಕೊಂಡು ಕತ್ತಲಲ್ಲೇ ಸಾಯಾಬೇಕಾಗುತ್ತೆ.‌
ನಮ್ಮ ಜೀವನ ಎಷ್ಟು ವಿಶಾಲ ಅಂತ ಥಿಂಕ್ ಮಾಡ್ತೀವೋ ಅಷ್ಟೇ ಚಿಕ್ದು ಅಂತ ಥಿಂಕ್ ಮಾಡೋ ನಮ್ಮಂತೋರು ಅಲ್ಲಲ್ಲಿ ನಿಮ್ ಅಕ್ಕಪಕ್ಕದಲ್ಲೇ ಓಡಾಡ್ತಾನೇ ಇರ್ತೀವಿ. ಒಂಚೂರು ದೃಷ್ಟಿ ತಿರುಗಿಸಿ ನೋಡಿದ್ರೆ ಕಾಣ್ಸ್ ಬಹುದು. ಈ ಲೈಫ್ ಸಾಲಲ್ಲ ಗುರೂ ಅಷ್ಟು ಕೆಲ್ಸಗಳು ದಿನಾ ನೆನ್ಪಾಗ್ತವೆ‌. ಏನ್ ಮಾಡೋದು ಕನ್ಸುಗಳ ಮೂಟೆ ಹೊತ್ತು ಸಾಗ್ತಾ ಇರೋ ನಮ್ಮಂತ ಅಲೆಮಾರಿಗಳ ಬದುಕಿಗೆ ಒಂದಷ್ಟು ಘಟನೆಗಳು ಇನ್ಸ್ಪೈರ್ ಆಗ್ಬಿಡಬಹುದು. ಅದೇ ನಮ್ ಜೀವ್ನನ ಎಲ್ಲೋ ಕರ್ಕೊಂಡ್ ಹೋಗ್ಬಹುದು. ಯಾವುದೋ ಒಂದು ದಾರಿ ನಿಮ್ಮ ಜೀವ್ನನ ಇನ್ಯಾವ್ದೋ ಗುರಿಕಡೆ ಕೊಂಡೊಯ್ಯಬಹುದು.
ಹಾಗೇ ನಾವ್ ಮಾಡೋ ಪ್ರತಿ ಕೆಲ್ಸ ,ಪ್ರತಿ ಕ್ಷಣ ನಮ್ಮನ್ನ ಹಿಂಬಾಲಿಸ್ತಾನೇ ಇರುತ್ತೆ. ನೆನಪಿಟ್ಕೊಬೇಕಾಗಿದ್ದು ನಾವ್ ಬಂದ ದಾರಿನಲ್ಲ ನಾವ್ ಮುಟ್ಟಬೇಕಾಗಿದ್ ಗುರಿಯನ್ನ. ನಮ್ ಜೊತೆ ನಡಿತಾ ಇರೋ ವ್ಯಕ್ತಿಗಳನ್ನ ಮತ್ತೆ ನಮ್ಗೆ ಸಹಕಾರ ನೀಡ್ತಾ ಇರೋ ಆತ್ಮಗಳನ್ನ ಹಾಗೂ ನಂಬಿರೋ ದೈವವನ್ನ.

           ಲೈಫು ಕೈಗೇ ಸಿಗೊಲ್ಲಾ ಅಂತ ಹೇಳೋರ್ನಾ ತುಂಬಾ ನೋಡಿದೀನಿ ಅಂತವ್ರಲ್ಲಿ ನಾನೂ ಒಬ್ಬ ಅಷ್ಟೇ.. ಯಾವ್ದೋ ರಸ್ತೆ ಹಿಡಿದು ಹಾದಿ ತಪ್ಪಿ ಇನ್ಯಾವ್ದೋ ರಸ್ತೆಯಲ್ಲಿ ಸಾಗ್ತಾ ಇರೋ ಗಾಡಿ ನಮ್ದು. ಸದ್ಯಕ್ಕೆ ಕಂಟ್ರೋಲ್ ನಮ್ ಕೈಲೇ ಇದೆ ಅನ್ನೋದು ಒಂದು ಒಳ್ಳೆ ವಿಷಯ ಆದ್ರೆ ಮುಂದೆ ಯಾವ್ ದಾರಿ ಹಿಡಿದ್ರೆ ಎಲ್ಲಿ ಹೋಗಬಹುದು ಅಂತ ಗೊತ್ತಿಲ್ದೇ ಇರೋದು ಇನ್ನೊಂದು ವಿಷಯ.
 ಮರೆತೇ ಹೋಗಿದ್ದೆ ಹಣದ್ ವಿಷಯ ಬಂದಾಗ ಏನ್ ಮಾಡೋದು.. ಜಗತ್ತು ನಡೀತಾ ಇರೋದೇ ಹಣದ್ ಮೇಲೇ ಅಂತ ಹೇಳೋ ಅಪ್ಪ. ಪ್ರೀತಿ ವಿಶ್ವಾಸದ ಮುಂದೆ ಹಣ ಎಲ್ಲ ಕ್ಷಣಿಕ ಅನ್ನೋ ಅಮ್ಮ ಇವೆಲ್ಲವುಗಳ ನಡುವೆ ಒದ್ದಾಡ್ತಾ ಇರೋ ಬರೋ ಖಾಲಿ ಲೈಫಲ್ಲಿ ಕೊನೆಗೊಂದ್ ಫುಲ್ಸ್ಟಾಪ್ ಇಡೋಕಾದ್ರೂ ಏನಾದ್ರೂ ಕಿತ್ ದಬಾಕ್ಬೇಕು ಅನ್ನೋ ಮನ್ಸು. ಉಫ್!! ಎಷ್ಟು ಒದ್ದಾಟ ನೋಡಿ. ನಾವ್ ಹಂಗೆಲ್ಲಾ ಸೋಲು ಒಪ್ಪಿಕೊಳ್ಳೋರಲ್ಲ ಅಂತ ಪದೇ ಪದೇ ಲೈಫಿಗೆ ಹೇಳ್ತಾ ಇದ್ರೂ ನಮ್ಮನ್ನ ಸೋಲ್ಸೋಕೇ ಟ್ರೈ ಮಾಡ್ತಾನೇ ಇರುತ್ತೇನೋ ಅನ್ಸ್ಬಿಡತ್ತೆ. ಗೊತ್ತಿಲ್ಲ ಇದುವರ್ಗೆ ಅಂತಾ ಅನುಭವ ಏನೂ ಆಗಿಲ್ಲ ಆದ್ರೂ ಹೇಳ್ತೀನಿ ಜಗತ್ತು ವಿಶಾಲ ಆಗಿದೆ, ಕನಸುಗಳನ್ನೂ ವಿಶಾಲ ಮಾಡ್ಕೋ ದಾರಿನೂ ವಿಶಾಲವಾಗೇ ಇರತ್ತೆ ಅಂತ ಹೇಳ್ಕೊತ್ತಾ ಇರ್ತೀನಿ. ಬದುಕಿದ್ರೆ ಖುಷಿಯಾಗೋವಷ್ಟು ಬದುಕಿಬಿಡು ಇಲ್ಲಾ ಅಂದ್ರೆ ಹಣೆಬರಹ ಅಂತ ತೆಪ್ಪಗಿರು ಅನ್ನೋದು ನಮ್ ಪಾಲಿಸಿ.


ಲೈಫಿನ ರೇಸಲ್ಲಿ ಓಡ್ತಾ ಇರ್ಬೇಕು ಪಕ್ದಲ್ಲಿ ಇನ್ಯಾರೋ ಓಡ್ತಾ ಇರ್ತಾರೆ.. ಆದ್ರೆ ನೀನು ನಿನ್ನದೇ ಟ್ರ್ಯಾಕಲ್ಲಿ ಓಡ್ಬೇಕು‌ ಅವನು ಮುಂದೆ ಹೋದ ಅಂತ ನೀನ್ ಅವನ ಟ್ರ್ಯಾಕ್ಗೆ ಹೋದ್ರೆ ಯಾವ್ ಗ್ಯಾರಂಟಿನೂ ಇಲ್ಲ ನೀನೂ ಮುಂದೆ ಬರ್ತೀಯಾ ಅಂತ ಅದಕ್ಕೇ ನಿನಗೇ ಅಂತನೇ ಸಪರೇಟ್ ಟ್ರ್ಯಾಕ್ನ ಲೈಫು ಅನ್ನೋದು ಕೊಟ್ಟಿರತ್ತೆ.
ಹೋಗ್ತಾ ಇರು ಜಿಗಿತಾ ಇರು ಮನಬಂದಂಗೆ ಸಾಗ್ತಾ ಇರು ಅಂತ  ಒಂದೆರಡ್ಸಲ ಅನ್ಸಿತ್ತು. ಮತ್ತೆ ಹಾಗೇ ಅನ್ಕೊಂಡು ಏನೋ ಮಾಡೋಕೋಗಿ ಇನ್ನೇನೋ ಮಾಡಿ ಮತ್ತೇನೋ ಆಗೋವಂತ ರಿಸ್ಕ್ ತಗೋಳೋ ಗೋಜಿಗೆ ಹೋಗ್ಲಿಲ್ಲ. ಮನುಷ್ಯ ನೀನು ಸಾಧಿಸೋ ತನ್ಕನೂ ದೂಷಿಸ್ತಾನೇ ಇರ್ತಾನೆ. ಯಾವಾಗ ನೀನು ಅವನಿಗೆ ಎದೆಕೊಟ್ಟು ನಿಂತು ನೀನು ಸರಿ ಇದೀಯಾ ಅಂತ ಪ್ರೂವ್ ಮಾಡ್ತೀಯೋ ಆಗ್ಲೇ ಅವ್ನು ನೀನು ಸರಿ ಇದೀಯಾ ಅಂತ ಅಪ್ರೂವಲ್ ಮಾಡ್ತಾನೆ. ಅಂದ್ರೆ ನನ್ನ ದಾರಿ ಸರಿ ಇದೆ ಅಂತ ಇನ್ಯಾರಿಂದನೋ ಸರ್ಟಿಫಿಕೇಟ್ ಪಡಿಬೇಕು ಅನ್ನೋದು ಖಾತ್ರಿಯಾಯ್ತು.

    ಮೊನ್ನೆ ಯಾರೋ ಪಾಪ ಕಾಲು ಸ್ವಲ್ಪ ಊನವಾಗಿತ್ತು. ಕುಂಟುತ್ತಾ ನಡೆದು ಹೋಗ್ತಾ ಇದ್ದ.‌ ಉರಿ ಬಿಸಿಲು ಗೊತ್ತಲ್ಲ ಮಿನಿಮಮ್ ೩೫ ಡಿಗ್ರಿ ಇತ್ತು. ಮಧ್ಯಾಹ್ನ ಒಂದೂವರೆ ಇರ್ಬಹುದು.
ಆ ಬಿಸಿಲಲ್ಲಿ ಅದೂ ಸಿಟಿಯಲ್ಲಿ ಯಾರು ತಾನೇ  ವಾಹನ ನಿಲ್ಸ್ತಾರೆ. 
ಅವ್ನೂ ಯಾವ ವಾಹನಕ್ಕೂ ವೇಟ್ ಮಾಡ್ತಾ ಇರ್ಲಿಲ್ಲ. ತನ್ನ ಕಾಲನ್ನ ಎಳೆದುಕೊಂಡೇ ನಡೆದು ಹೋಗ್ತಾ ಇದ್ದ. ಅಷ್ಟೇ ಹಿಂದೆ ಇಂದ ಯಾರೋ ಸ್ಕೂಟರ್‌ ಮೇಲೆ ಬಂದ ಅಂಕಲ್ ತನ್ನ ಗಾಡಿ ನಿಲ್ಸಿ ಅವ್ನನ್ನ ಹತ್ತಸಿಕೊಂಡು ಡ್ರಾಪ್ ಮಾಡ್ದ. ಅದರಲ್ಲೇನೂ ವಿಶೇಷ ಇಲ್ಲ. ಆದ್ರೆ ನನಗನ್ನಿಸಿದ್ದು ನಾವ್ ಯಾರ್ಗೂ ವೇಟ್ ಮಾಡ್ದೇ ಸಾಗ್ತಾ ಇರ್ಬೇಕು  ಯಾರಾದ್ರೂ ನಮ್ಮನ್ನ ನೋಡೇ ನೋಡ್ತಾರೆ. ಜಗತ್ತು ವಿಶಾಲವಾಗಿದೆ ಅನ್ನೋದು ಮತ್ತೆ ಮತ್ತೆ ಕಾಣಿಸ್ತಾನೇ ಇರುತ್ತೆ‌.

ಹಿಂಗೇ ಒಂದಿನ ನೋಡಿದ್ದು, ರಸ್ತೆ ಕ್ರಾಸ್ ಮಾಡೋಕೆ ಅಂತ ಒಂದು ನಾಯಿ ಟ್ರೈ ಮಾಡ್ತಾ ಇತ್ತು. ವೇಗವಾಗಿ ಒಂದರ ಹಿಂದೆ ಇನ್ನೊಂದು ವೆಹಿಕಲ್ ಬರ್ತಾ ಇತ್ತು. ನಾಯಿ ಎರ್ಡ್ ಸಲ ಅರ್ಧ ರಸ್ತೆಗೆ ಹೋಗಿ ಮತ್ತೆ ವಾಪಸ್ ಬಂತು. ಅಕ್ಕಪಕ್ದಲ್ಲಿ ವೆಹಿಕಲ್ ಜೋರಾಗಿ ಬರ್ತಾ ಇರೋದ್ನ ನೋಡಿ ಅದಕ್ಕೆ ಇನ್ನೇನು ಮಾಡೋಕಾಗಲ್ಲ ಅಂತ ಯೋಚ್ನೆ ಬಂತೇನೋ..  ಕಣ್ಮುಚ್ಚಿ ಒಂದೇ ಏಟು ಎರಡೇ ಸೆಕೆಂಡ್ ಅಷ್ಟೇ ಅದು ದಾಟಿದ್ದೂ ಕಾಣ್ಸ್ಲಿಲ್ಲ. ಈ ಕಡೆ ಇಂದ ಆ ಕಡೆ ದಾಟಿ ಬಾಲ ಅಲ್ಲಾಡಿಸ್ತಾ ಹೋಗ್ತಾ ಇತ್ತು. ನೋಡ್ತಾ ಇದ್ದ ನನಗೆ ನಾನೂ ದಾಟ್ಬೇಕು ಅಂತ ಯೋಚನೆ ಮನ್ಸಲ್ ಬಂದ್ರೂ ಭಯ ಒಂದೆಜ್ಜೆ ಮುಂದೇನೇ ಇರತ್ತೆ ನೋಡಿ.!!

ಇವೆಲ್ಲ ಚಿಕ್ಪುಟ್ಟ ಇನ್ಸಿಡೆಂಟ್ಗಳು ಬದುಕಿಗೆ ಹೇಗೆಲ್ಲಾ ದಾರಿ ತೋರ್ಸಬಹುದು ಅನ್ನೋದು ನಾವು ಅರ್ಥ ಮಾಡ್ಕೊಳ್ಳೋದೊಂದೇ ಬಾಕಿ ಇರುವಂತದ್ದು‌. ಸುತ್ತಾ ಜನ ಇದ್ದಾರೆ ಕೆಲವೊಮ್ಮೆ ಭಯ ಜನರಿಂದನೇ ಸೃಷ್ಟಿ ಆದ್ರೆ ಇನ್ನ್ ಕೆಲವೊಮ್ಮೆ ನನ್ ಸುತ್ತ ಜನ ಇದಾರೆ ಅನ್ನೋ ಧೈರ್ಯ ಅದರ ಹತ್ತರಷ್ಟು ಶಕ್ತಿಯುತವಾಗಿರುತ್ತೆ‌. ಹಾಗೇ ಮುನ್ನುಗ್ಗಬೇಕಾದ ಕರ್ತವ್ಯ ನಮ್ ಮೇಲಿದೆ‌. ಮನುಷ್ಯ ಇರೋತನ್ಕ ಮಾನವೀಯತೆಯೂ ಇರುತ್ತೆ. ಹುಡುಕ್ತಾ ಹುಡುಕ್ತಾ ಸಾಗೋಣ‌. ಒಳಗಿರೋ   ಹತಾಷೆಯನ್ನ  ಕಮ್ಮಿ ಮಾಡ್ತಾ ಬದುಕೋಣ.. ಮತ್ತೆ ಸಿಗೋಣ ಪ್ರೆಂಡ್ಸ್..!!

No comments:

Post a Comment

ಸದ್ಯದ ಬರ್ಯಾಣ

DEJA-VU

ಕಾನೂರಿನಲ್ಲಿ ಇಂತಾ ಫಟಿಂಗರ ಸಂಖ್ಯೆ ತುಂಬಾ ಏನಿಲ್ಲ‌. ವೆಂಕಣ್ಣ ಅಂತ ಮಹಾಫಟಿಂಗರ ಸಾಲಿಗಂತೂ ಸೇರಿಸೋದಕ್ಕೆ ಲಾಯಕ್ಕಿಲ್ಲ. ಅವನ ಕರಾಮತ್ತು ಹೇಳಿಕೊಳ್ಳುವಂತ ಘನಾಂದಾರಿದು ಅ...

ಟಾಪ್ ಓದಾಣ